Skip to main content

Posts

ಅನುಮತಿ ಕೊಡು

 ನೀ ನಾಚಿ ಇನೊಮ್ಮೆ ನಕ್ಕು ಬಿಡಬೇಡ ನನ್ನ ನೋಡಿ,  ನಿನ್ನ ನಾಚಿಕೆ ನೋಡಿ ನಾ ನಿನ್ನ ಪ್ರೀತಿಯಲ್ಲಿ ಮರುಳಾಗಿಬಿಡುವೆ,  ಮತೊಮ್ಮೆ ಹೇಳಿ ಬಿಡುವೆಯಾ ನಿನ್ನ ಮನದಾಳದ ರಾಗವ ಹಾಡಿ,  ನಾ ಇನೊಮ್ಮೆ ನಿನ್ನ ರಾಗಕ್ಕೆ ನನ್ನ ರಾಗ ಸೇರಿಸಿ ಈ ಜಗಕ್ಕೆ ಹೇಳಿ ಕೂಗಿ ಬಿಡುವೆ, ಪುಟ ಹೃದಯ ಇದು ಹುಚ್ಚು ಕನಸು ಕಂಡಿದೆ ಎಂದು, ಆ ಹುಚ್ಚ ಕನಸಲ್ಲಿ ನಿನ್ನನ್ನೇ ತುಂಬಿರುವೆ ಇಂದು, ಒಮ್ಮೆ ಕೂಗಿ ಹೇಳಿ ಬಿಡು ಆ ಕನಸಿನ ರಾಣಿ ನೀ ಆಗುವೆಯಾ,  ನಿನ್ನ ನನ್ನ ಹೃದಯದಲ್ಲಿ ಪಟ್ಟಾಭಿಷೇಕ ಮಾಡಲು ಕಾದಿರುವೆಯಾ, ಒಮ್ಮೆ ನೀ ಈ ಸಿಂಹಾಸನ ಏರಿ ಹೃದಯದ ಒಡತಿ ಆಗಿಬಿಡು, ಸದಾ ಕಾಲ ನಿನ್ನ ಸೇನಾಧಿಪತಿಯಾಗಿ ನಿನ್ನನ್ನು ಕಾಯಲು ಅನುಮತಿ ಕೊಡು..!
Recent posts

ಕಾಡಬೇಡ ಗೆಳತಿ

 ಹಗಲು ಇರುಳೆನ್ನದೆ ಕಾಡಿದೆಯನ್ನ ಕಿರುನಗೆ ಬೀರುತ ಮೋಹಿಸಿದೆಯನ್ನ ಕನಸ, ನನಸಾಗಿಸಿ ಆಲಂಗಿಸಿದೆಯನ್ನ ನೆನಪುಗಳ ಭಾವದಲ್ಲಿ ಬಂಧಿಸಿರುವೆಯನ್ನ..!! ಎಂದು ಬರುವೆ...? ಈ ಕನಸ ಹೂವಾಗಿಸಿ,ನಲ್ಮೆಯ ರಸದೌತಣ ಉಣಬಡಿಸಲು ಕಾದಿರುವೆ ನಾನಿನ್ನ, ತುಂಬಿದ ಹೃದಯದಲ್ಲಿ ಭಾಂದವ್ಯದ ಭಾವ ತಿಜೋರಿಯೊಳಗೆ ಬಂಧಿರೀಸಿರುವೆ ನಿನ್ನ..!! ಅನುರಾಗದ ಅರಮನೆಯಲ್ಲಿ ಕಾದಿರುವೆ ನಿನಗಾಗಿ ಎದೆ ಕದವ ತೆರೆದು, ಈ ಜಗದ ದೊಂಬಿಯ ಮರೆತು ಹೃದಯ ತಾಳ ತಪ್ಪುತಿರುವುದು, ಮುತ್ತಿನ ಮಳೆ ಸುರಿಸುತ್ತ, ನಮ್ಮ ಪಾಲಿಗೆ ಇದು ಸ್ವರ್ಗವಾಗಿರುವುದು..!! ಅಂತರಂಗದಿ ಪುಟಿದೇಳುತಿದೆ ನಿನ್ನಯ ಚೆಲುವು ತುಂಬಿದ ಕಂಗಳ ನೆನೆದು, ಬಯಕೆ ಮೂಡಿಹುದು ಮನಸು ನಿನ್ನ ಸೇರಲು ಹಪಹಪಿಸುತ್ತಿರುವುದು, ನಿನ್ನ ಕಾಣುವ ಹಂಬಲದಿ ಕನಸುಗಳ ಹೆಣೆಯುತಿಹುದು..!! ಮನಕ್ಕೆ ಬೇಕಿಹುದು ನಿನ್ನ ತೋಳಬಲದ ಅಪ್ಪುಗೆ, ಕಳೆದು ಹೋಗುವೆ ಪ್ರೀತಿಯ ಬೇಡುತ ನಿನ್ನೊಪ್ಪಿಗೆ, ಎದೆಗೊರಗಿ ನಾನು ನಿದ್ರಿಸುವೆ ಮಗುವಾಗಿ, ಅಪ್ಪಿ ಮುದ್ದಿಸುವೆಯಾ ನೀ ಬೆಳದಿಂಗಳ ಚಂದಿರನಾಗಿ..!! "ಕಾಡಬೇಡ ಗೆಳತಿ ನೀನಿನ್ನೂ ದೂರ ನಿಂತು ಕಾಡಿಸಿದ್ದು ಸಾಕಿನ್ನೂ "

ಆದರ್ಶ ಶಿಕ್ಷಕ

ಆದರ್ಶ ಶಿಕ್ಷಕ : "ಹಿಂದೆ ಗುರು ಇರಬೇಕು, ಮುಂದೊಂದು ಗುರಿ ಇರಬೇಕು ", ಎನ್ನುವ ಮಾತು ನನಗೆ ಯಾವಾಗಲೂ ಗುರುವಿನ ಮೇಲಿರುವ ನಂಬಿಕೆಯನ್ನು ತೋರಿಸುತ್ತದೆ. ಗುರು ಎನ್ನುವ ಪದಕ್ಕೆ ಅಥವಾ ಆ ವ್ಯಕ್ತಿತ್ವಕ್ಕೆ ಸಮಾಜದಲ್ಲಿರುವ ಪ್ರಾಮುಖ್ಯತೆ ಬಹುಶ ಬೇರೆ ಯಾವ ವ್ಯಕ್ತಿಗೂ ಇಲ್ಲ ಎಂದೆನಿಸುತ್ತದೆ. ಯಾಕೆಂದರೆ ಎಲ್ಲಾ ವ್ಯಕ್ತಿಗಳಿಗೂ ಮೂಲ ಈ ಗುರುವಿನ ಕಾರ್ಯವಲ್ಲವೇ ? ಅನಾದಿ ಕಾಲದಿಂದಲೂ ನಡೆದಾಡುವ ದೇವರೆಂದರೆ ತಾಯಿಯ ನಂತರ ನಿಲ್ಲುವುದು ಇದೆ ಗುರುವಿರಬಹುದು, ನಮ್ಮ ಗುರಿಗೆ ರೂವಾರಿಯಾಗುವ ಗುರು. ನನ್ನ ಬಹುದಿನದ ಅಂದರೆ ಚಿಕ್ಕ ವಯಸ್ಸಿನ ಗುರಿ ಗುರುಯಾಗಬೇಕೆಂದು ಅಂದರೆ ಶಿಕ್ಷಕ ವೃತಿಯನ್ನು ಅನುಸರಿಸಬೇಕೆಂದು, ಪ್ರಾಯಶಃ ಯಾಕಿರಬಹುದು? ನನ್ನ ಪ್ರಕಾರ ಭ್ರಷ್ಟಾಚಾರವೇ ಇಲ್ಲದ ಒಂದೇ ಒಂದು ಕ್ಷೇತ್ರ ಅದಾಗಿತ್ತು. ಆದರೆ ಇಂದಿನ ಪರಿಸ್ಥಿತಿ ಭಿನ್ನವಾಗಿಯೇ ಇದೆ ಬಿಡಿ..., ವೇದಗಳ ಕಾಲದಿಂದಲೂ ಬ್ರಾಹ್ಮಣರಿಗೆ ಮಾತ್ರ ವಿದ್ಯಾಭ್ಯಾಸ ಬೇಕು , ಅವರು ಮಾತ್ರ ಗುರು ಸ್ಥಾನದಲ್ಲಿ ಇರಬೇಕೆಂಬ ಧೋರಣೆ ಬದಲಾಗಿದೆ. ಶಿಕ್ಷಣವನ್ನು ನೀಡುದುವ ಪ್ರತಿಯೊಬ್ಬರೂ ಶಿಕ್ಷಕರಾಗಿದ್ದಾರೆ. ಮನೆಯೇ ಮೊದಲ ಪಾಠಶಾಲೆ , ತಾಯಿಯೇ ಮೊದಲ ಗುರು ಎನ್ನುವ ಮಾತಿನಂತೆ, 6 ನೇ ವಯಸ್ಸಿಗೆ ಒಂದು ಮಗು ( ಈಗ ಮೂರನೇ ವಯಸ್ಸೇ ಆಗಿರುವುದು ಶೋಚನೀಯವೇ ಸರಿ ) ಶಾಲೆಯಲ್ಲಿ ತನ್ನ ಭವಿಷ್ಯವನ್ನು ಕಟ್ಟಿಕೊಳ್ಳುವ ಪದ್ಧತಿ ಇದೆ. 6  ವರ್ಷದ ಆ ಮಗುವನ್ನು ತಿದ್ದುವ ಸಂಪೂರ್ಣ ಜವಾಬ...

ತಾಳ್ಮೆಯೇ ಸದ್ಗುಣ

ನಿಮ್ಮ ನಿರೀಕ್ಷಿತ ಸಮಯದಲ್ಲಿ ಕೆಲಸಗಳು ನಡೆಯದ ಕಾರಣ ಮುಂದುವರೆಯುವುದು ಬೇಡ ಎಂದು   ನೀವು ಯೋಚಿಸಿದೀರಾ ? ನಿಮ್ಮ ಕೆಲಸದಲ್ಲಿ ಬೆಳವಣಿಗೆಯನ್ನು ಕಾಣದ ಕಾರಣ ನೀವು ಏನು ಮಾಡುತ್ತಿದ್ದೀರಿ ಅದನ್ನು ಕೈಬಿಡಲು   ನಿರ್ಧರಿಸಿದೀರಾ ? ನಿಮ್ಮ ಕೆಲಸದಲ್ಲಿ ಅನುಭವಿಸಿದ ವೈಫಲ್ಯಗಳಿಂದಾಗಿ ನೀವು ಎಂದಾದರೂ ಆ ಕೆಲಸವನ್ನು   ಕೊನೆಗೊಳಿಸಬೇಕೆಂದು ತೀರ್ಮಾನಿಸಿದೀರಾ ? ಜೀವನದಲ್ಲಿ ಅನಿವಾರ್ಯವಾಗಿ ಕಂಡ ಏರಿಳಿತದ ಕಾರಣದಿಂದಾಗಿ ನೀವು ದುಃಖದಿಂದ , ಖಿನ್ನತೆಯಿಂದ ಮತ್ತು ನಕಾರಾತ್ಮಕ ಭಾವನೆಗಳಿಂದ ಮುಳುಗಿದಾಗ , ಮಾಡುತ್ತಿರುವ ಕೆಲಸವನ್ನು ಅರ್ಧದಲ್ಲಿ ಬಿಡಬೇಕೆಂದು ನೀವು ಭಾವಿಸಿದಾಗ , ಜೀವನವನ್ನು ಮುಂದುವರಿಸಲು ಒಂದು ಕಾರಣವನ್ನು ನೋಡಲು ನಿಮಗೆ ಸಾಧ್ಯವಾಗದಿದ್ದಾಗ , ನಿಮನ್ನು ನೀವು ಸರಳವಾದ ಮತ್ತು ಆಳವಾದ ಒಂದು ಸಾದೃಶ್ಯವೆಂದು ಭಾವಿಸಿಕೊಳ್ಳಿ. ಅದಕ್ಕಾಗಿ ಈ ಸಣ್ಣ ಅನುಭವವನ್ನು ಓದಿ: ಒಬ್ಬ ವ್ಯಕ್ತಿ ತನ್ನ ಹೊಲದಲ್ಲಿ ಜರೀಗಿಡ ಮತ್ತು ಬಿದಿರಿನ ಬೀಜಗಳನ್ನು ಬಿತ್ತಿದನು ಮತ್ತು ಅವುಗಳಿಗೆ   ಸಾಕಷ್ಟು ಬೆಳಕು ಮತ್ತು ನೀರು ಸಿಗುವಂತೆ ನೋಡಿಕೊಂಡರು.   ಜರೀಗಿಡವು ಭೂಮಿಯಿಂದ ಬೇಗನೆ ಮೊಳಕೆಯೊಡೆದು ಹೊರಹೊಮ್ಮಿ ಅದರ ಸಂಪೂರ್ಣ ಸುತ್ತಮುತ್ತಲಿನ ಪ್ರದೇಶಗಳನ್ನು ಹಸಿರು ಬಣ್ಣದಿಂದ ಆವರಿಸುವುದನ್ನು ನೋಡಿ ಅವನು ಸಂತೋಷಪಟ್ಟನು , ಆದರೆ ಬಿದಿರಿನ ನೋಟದಿಂದ ಏನೂ ಹೊರಬರದನ್ನು ನೋಡಿದಾಗ ಅವನು ನಿರಾಶೆಗೊಂಡನು , ಆದರೆ ...

ಮೌನ : ಏಕಾಂತದ ಸಂಗಾತಿ :

ಮೌನ : ಏಕಾಂತದ ಸಂಗಾತಿ : ಹೆಣ್ ಹೆಸರ ರೂಪ ಧರಿಸಿ.. ನಿನಾದದ ಗೋಡೆ ಮರೆಗೆ ಅವಿತವಳು.. ಮಾತುಗಳು ಉಸಿರೆಳೆದಾಗ.. ಭಾವುಕತೆಗೆ ಮಾತಾದವಳು... ನನ್ನ ಉಸಿರಾದವಳು; ಮೌನ..!! ಕ್ಷಮಿಸಲಾಗದ ತಪ್ಪು ಮಾಡಿದ ನನಗೆ.. ಕ್ಷಮೆಯೊಪ್ಪಿ ಪ್ರೀತಿ ಕೊಟ್ಟು ಪ್ರೀತಿಸಿದವಳು.. ಭಾವನೆಗಳ ಕಾಲುವೆಯಲ್ಲಿ  ಅವಿತಿದ್ದಾಗ.. ಕಣ್ಣೀರೆರೆದು ಬೆಳೆಸಿ ಪೋಷಿಷಿದವಳು.. ನನ್ನ ಉಸಿರಾದವಳು; ಮೌನ..!! ಮಾತು ಬಾರದ ಮುಗುಳ್ನಗೆಯೊಂದಿಗೆ.. ನಗುಮುಖವ ಧಾರೆಯೆರೆದು ಬೆಂಬಲಿಸಿದವಳು.. ನಡುರಾತ್ರಿ ಕಣ್ಣ ಬೆವರಲ್ಲಿ  ನಡುಗುತಿದ್ದಾಗ.. ತನ್ನ ಹಸ್ತ ನೀಡಿ ಸ್ವಾಗತಿಸಿದವಳು.. ನನ್ನ ಉಸಿರಾದವಳು; ಮೌನ..!! ತನ್ನ ಅಸೆ ಆಕಾಂಕ್ಷೆಗಳನ್ನು ತೊರೆದು, ಪ್ರೀತಿಯ ಜಡಿಮಳೆ ಸುರಿಸಿ ಅವಕಾಶ ಕಲ್ಪಿಸಿದವಳು, ತಪ್ಪು ದಾರಿ ಹಿಡಿದು, ಸೋತು ದುಃಖದಲ್ಲಿದ್ದಾಗ ದೂರವೇ ನಿಂತು ಸಾಂತ್ವನ ಹೇಳಿ ಸಂತೈಸಿದವಳು ನನ್ನ ಉಸಿರಾದವಳು; ಮೌನ! ಕವಿದ ಕಲ್ಪನೆಗೆ ಹಣತೆಯಾಗಿ ಒಲವಿನ ಪುಟದ ಮರೆಗೆ ಕವಿತೆಯಾದವಳು ಜೀವನದಲ್ಲಿ ಕಹಿಯನ್ನೇ ಕಂಡು ಬರಿದಾಗಿದ್ದಾಗ ಹಠಮಾರಿತನದ ಕಬ್ಬನು ಬಸಿದು ಸೌಮ್ಯತೆಯ ಸಿಹಿ ನೀಡಿದವಳು ನನ್ನ ಉಸಿರಾದವಳು; ಮೌನ! ಸೋಕದ ಮುತ್ತಿನ ಬಿಸಿಗೆ ಕರಗಿ ವಾಲದ ತೋಳಿನ ನಡುವೆ ಬಂದಿಯಾದವಳು ಉಸಿರಿನ ಅಂಚೆ ಕಳೆದು, ಮನಃ ಜೋಪಡಿಯಾದಾಗ ಎದೆಯ ಅಂತಃಪುರಕ್ಕೆ ಕಿರೀಟವಿರದೆ ರಾಣಿಯಾದವಳು ನನ್ನ ಉಸಿರಾದವಳು; ಮೌನ!       ...

ಆತ್ಮ ಸ್ತಯ್ರ್ಯ ..

ದಯವಿಟ್ಟು ಅವಳಿಗೆ ಅಂಗವಿಕಲೆ ಪಟ್ಟ ಕಟ್ಟಬೇಡಿ ಅವಳಿಗೆ; ನೀನು ಸಬಲಳು ಎಂದು ಒಮ್ಮೆ ಹೇಳಿನೋಡಿ, ದಯವಿಟ್ಟು ಅವಳನ್ನು ಶೋಷಿಸುವ ಹಾಗೆ ನೋಡಬೇಡಿ ಅವಳನ್ನು ಯಾವತ್ತು ಹೀಯಾಳಿಸಬೇಡಿ. ನೀವು ಭಾವಿಸಬಹುದು, ಅವಳಿಗೆ ಬೇಕು ಸಹಾನುಭೂತಿ ಆದರೆ; ಅವಳಿಗೆ ಬೇಕಾಗಿರುವುದು ಬರಿ ಅನುಭೂತಿ, ನೋಡಿ ಅವಳನ್ನು ಅದೇ ಪೂರ್ಣ ಘನತೆಯಿಂದ ಅದೇ ಮಾನವೀಯತೆಯ ದೃಷ್ಟಿಯಿಂದ. ಯಾವಾಗಲೂ ಅವಳಿಗೆ ಒಂದು ಅವಕಾಶ ನೀಡಿ ಅವಳು ಶಕ್ತಳಲ್ಲ ಎಂದು ಯೋಚಿಸುವುದನ್ನು ಬಿಡಿ, ಅವಳಿಗೆ ಅದನ್ನು ಸ್ವಂತವಾಗಿ ಮಾಡಬಹುದಾದರೆ ಒಬ್ಬಳೇ ಮಾಡಲಿ ಬಿಡಿ, ನಿಮಗೇನು ತೊಂದರೆ. ನೀವು ಭೇಟಿಮಾಡುವಾಗ ಆಕೆಯನ್ನು; ಅಂತರಇರಿಸಬೇಡಿ ಆಕೆಯ ಅಂಗವಿಕಲತೆಯನ್ನು ಬಿಡಿ; ಆಕೆಗೆ ಪ್ರಾಮುಖ್ಯತೆ ಕೊಡಿ. ನಾವು ನೋಡದ ಒಂದು ಆತ್ಮ ಅವಳಲ್ಲಿ ಇದೆ, ಅವಳನ್ನು ಇತರ ಮಾನವರಂತೆ ನೋಡಿ! - AliEn!

ಅಪರಿಚಿತೆ...!

ಅಪರಿಚಿತೆ...! ನಿನ್ನ ಕಣ್ಣ ಕಣ್ಮರೆಯಲ್ಲಿ ಕರಗಿ ನೀರಾಗುವ ಆಸೆಯೊಂದಿಗೆ, ಹಾತೊರೆಯುತಿದೆ ನನ್ನ ಕನಸುಗಳು ... ಕಣ್ಣ ಜೋಡಿ ಮಿಟುಕಿಸುವ ಮುನ್ನವೇ, ಕಣ್ಣ ಮಳೆ ಧಾರಾಕಾರವಾಗಿ ಸುರಿಯಲಾರಂಭಿಸಿತು, ನಿನ್ನ ನೆನೆದು.. ನೆನಪಾದವು, ನೀ ನನ್ನ ಸಂತೈಸಿದ ಆ ಏಕಾಂತದ  ದಿನಗಳು, ಮುಗುಳ್ನಕ್ಕು; ಮೋಡ ಕರಗಿತು ಕಣ್ಣಂಚಿನಲ್ಲಿ... ಎಲ್ಲಿರುವೆ; ನನ್ನ ಹೃದಯದ ವೀಣೆಯ ತಂತಿಯ ಮೀಟಿದ, ಅಪರಿಚಿತೆ.. ಕಣ್ಣ ಮುಂದೆ ಬಂದು; ನನ್ನ ಕಣ್ಣ ಮಳೆಗೆ, ಕೊಡೆ ಹಿಡಿಯಲಾರೆಯ..? - AliEn!