Skip to main content

ಮೌನ : ಏಕಾಂತದ ಸಂಗಾತಿ :

ಮೌನ : ಏಕಾಂತದ ಸಂಗಾತಿ :

ಹೆಣ್ ಹೆಸರ ರೂಪ ಧರಿಸಿ..
ನಿನಾದದ ಗೋಡೆ ಮರೆಗೆ ಅವಿತವಳು..
ಮಾತುಗಳು ಉಸಿರೆಳೆದಾಗ..
ಭಾವುಕತೆಗೆ ಮಾತಾದವಳು...
ನನ್ನ ಉಸಿರಾದವಳು; ಮೌನ..!!

ಕ್ಷಮಿಸಲಾಗದ ತಪ್ಪು ಮಾಡಿದ ನನಗೆ..
ಕ್ಷಮೆಯೊಪ್ಪಿ ಪ್ರೀತಿ ಕೊಟ್ಟು ಪ್ರೀತಿಸಿದವಳು..
ಭಾವನೆಗಳ ಕಾಲುವೆಯಲ್ಲಿ  ಅವಿತಿದ್ದಾಗ..
ಕಣ್ಣೀರೆರೆದು ಬೆಳೆಸಿ ಪೋಷಿಷಿದವಳು..
ನನ್ನ ಉಸಿರಾದವಳು; ಮೌನ..!!

ಮಾತು ಬಾರದ ಮುಗುಳ್ನಗೆಯೊಂದಿಗೆ..
ನಗುಮುಖವ ಧಾರೆಯೆರೆದು ಬೆಂಬಲಿಸಿದವಳು..
ನಡುರಾತ್ರಿ ಕಣ್ಣ ಬೆವರಲ್ಲಿ  ನಡುಗುತಿದ್ದಾಗ..
ತನ್ನ ಹಸ್ತ ನೀಡಿ ಸ್ವಾಗತಿಸಿದವಳು..
ನನ್ನ ಉಸಿರಾದವಳು; ಮೌನ..!!

ತನ್ನ ಅಸೆ ಆಕಾಂಕ್ಷೆಗಳನ್ನು ತೊರೆದು,
ಪ್ರೀತಿಯ ಜಡಿಮಳೆ ಸುರಿಸಿ ಅವಕಾಶ ಕಲ್ಪಿಸಿದವಳು,
ತಪ್ಪು ದಾರಿ ಹಿಡಿದು, ಸೋತು ದುಃಖದಲ್ಲಿದ್ದಾಗ
ದೂರವೇ ನಿಂತು ಸಾಂತ್ವನ ಹೇಳಿ ಸಂತೈಸಿದವಳು
ನನ್ನ ಉಸಿರಾದವಳು; ಮೌನ!

ಕವಿದ ಕಲ್ಪನೆಗೆ ಹಣತೆಯಾಗಿ
ಒಲವಿನ ಪುಟದ ಮರೆಗೆ ಕವಿತೆಯಾದವಳು
ಜೀವನದಲ್ಲಿ ಕಹಿಯನ್ನೇ ಕಂಡು ಬರಿದಾಗಿದ್ದಾಗ
ಹಠಮಾರಿತನದ ಕಬ್ಬನು ಬಸಿದು ಸೌಮ್ಯತೆಯ ಸಿಹಿ ನೀಡಿದವಳು
ನನ್ನ ಉಸಿರಾದವಳು; ಮೌನ!

ಸೋಕದ ಮುತ್ತಿನ ಬಿಸಿಗೆ ಕರಗಿ
ವಾಲದ ತೋಳಿನ ನಡುವೆ ಬಂದಿಯಾದವಳು
ಉಸಿರಿನ ಅಂಚೆ ಕಳೆದು, ಮನಃ ಜೋಪಡಿಯಾದಾಗ
ಎದೆಯ ಅಂತಃಪುರಕ್ಕೆ ಕಿರೀಟವಿರದೆ ರಾಣಿಯಾದವಳು
ನನ್ನ ಉಸಿರಾದವಳು; ಮೌನ!
                                      - AliEn -


Comments

  1. ಹೇ ಅಜ್ಞಾತ ಕವಿಯೇ ಮೌನ ಮುರಿದು ಹೇಳು ಯಾರು ನೀನು

    ReplyDelete

Post a Comment

Popular posts from this blog

ಆದರ್ಶ ಶಿಕ್ಷಕ

ಆದರ್ಶ ಶಿಕ್ಷಕ : "ಹಿಂದೆ ಗುರು ಇರಬೇಕು, ಮುಂದೊಂದು ಗುರಿ ಇರಬೇಕು ", ಎನ್ನುವ ಮಾತು ನನಗೆ ಯಾವಾಗಲೂ ಗುರುವಿನ ಮೇಲಿರುವ ನಂಬಿಕೆಯನ್ನು ತೋರಿಸುತ್ತದೆ. ಗುರು ಎನ್ನುವ ಪದಕ್ಕೆ ಅಥವಾ ಆ ವ್ಯಕ್ತಿತ್ವಕ್ಕೆ ಸಮಾಜದಲ್ಲಿರುವ ಪ್ರಾಮುಖ್ಯತೆ ಬಹುಶ ಬೇರೆ ಯಾವ ವ್ಯಕ್ತಿಗೂ ಇಲ್ಲ ಎಂದೆನಿಸುತ್ತದೆ. ಯಾಕೆಂದರೆ ಎಲ್ಲಾ ವ್ಯಕ್ತಿಗಳಿಗೂ ಮೂಲ ಈ ಗುರುವಿನ ಕಾರ್ಯವಲ್ಲವೇ ? ಅನಾದಿ ಕಾಲದಿಂದಲೂ ನಡೆದಾಡುವ ದೇವರೆಂದರೆ ತಾಯಿಯ ನಂತರ ನಿಲ್ಲುವುದು ಇದೆ ಗುರುವಿರಬಹುದು, ನಮ್ಮ ಗುರಿಗೆ ರೂವಾರಿಯಾಗುವ ಗುರು. ನನ್ನ ಬಹುದಿನದ ಅಂದರೆ ಚಿಕ್ಕ ವಯಸ್ಸಿನ ಗುರಿ ಗುರುಯಾಗಬೇಕೆಂದು ಅಂದರೆ ಶಿಕ್ಷಕ ವೃತಿಯನ್ನು ಅನುಸರಿಸಬೇಕೆಂದು, ಪ್ರಾಯಶಃ ಯಾಕಿರಬಹುದು? ನನ್ನ ಪ್ರಕಾರ ಭ್ರಷ್ಟಾಚಾರವೇ ಇಲ್ಲದ ಒಂದೇ ಒಂದು ಕ್ಷೇತ್ರ ಅದಾಗಿತ್ತು. ಆದರೆ ಇಂದಿನ ಪರಿಸ್ಥಿತಿ ಭಿನ್ನವಾಗಿಯೇ ಇದೆ ಬಿಡಿ..., ವೇದಗಳ ಕಾಲದಿಂದಲೂ ಬ್ರಾಹ್ಮಣರಿಗೆ ಮಾತ್ರ ವಿದ್ಯಾಭ್ಯಾಸ ಬೇಕು , ಅವರು ಮಾತ್ರ ಗುರು ಸ್ಥಾನದಲ್ಲಿ ಇರಬೇಕೆಂಬ ಧೋರಣೆ ಬದಲಾಗಿದೆ. ಶಿಕ್ಷಣವನ್ನು ನೀಡುದುವ ಪ್ರತಿಯೊಬ್ಬರೂ ಶಿಕ್ಷಕರಾಗಿದ್ದಾರೆ. ಮನೆಯೇ ಮೊದಲ ಪಾಠಶಾಲೆ , ತಾಯಿಯೇ ಮೊದಲ ಗುರು ಎನ್ನುವ ಮಾತಿನಂತೆ, 6 ನೇ ವಯಸ್ಸಿಗೆ ಒಂದು ಮಗು ( ಈಗ ಮೂರನೇ ವಯಸ್ಸೇ ಆಗಿರುವುದು ಶೋಚನೀಯವೇ ಸರಿ ) ಶಾಲೆಯಲ್ಲಿ ತನ್ನ ಭವಿಷ್ಯವನ್ನು ಕಟ್ಟಿಕೊಳ್ಳುವ ಪದ್ಧತಿ ಇದೆ. 6  ವರ್ಷದ ಆ ಮಗುವನ್ನು ತಿದ್ದುವ ಸಂಪೂರ್ಣ ಜವಾಬ...

Kannada Poem

ಮುಗ್ದತೆಯ ‌‌‌‌ಮಂಪರು ಗೊಂಬೆ..!! ಲೇ ಹುಡುಗಿ,  ನಾನಿಂದು ನಿನ್ನ ಪ್ರೆಮ ಪೀಡಿತ ನನ್ನವಳಂತು ನೀ ಖಂಡಿತ ನನಗರಿವಿಲ್ಲ ಏನಿದ್ದಕ್ಕೆ ಪ್ರೇರೇಪಿತ ನೀನಿಲ್ಲದೆ ನಿಲ್ಲುತ್ತೆ ನನ್ನ ಎದೆಬಡಿತ..! ನನ್ನನೇಕೆ ಕಾಡಿಸುತೀಯ ಓ ಹೆಣ್ಣೇ ಮರೆಯಲಾರೆ ಕಣ್ಣಲ್ಲಿ ನೀ ಕೊಟ್ಟ ಸನ್ನೆ ನಿನ್ನಾ ಜೋಡಿಸಿರುವ ಹಲ್ಲುಗಳು ದಾಳಿಂಬೆ ಹಣ್ಣೇ ನೀನಿರದೆ ಬದುಕಲಾರೆ ಭೂಮಿ ತಾಯಾಣೇ...! ಮನದಲಿರುವುದನ್ನು ಹೇಳುವಾಸೆ ಚೆಲುವೆ ನನಗಿಂತ ಮೊದಲು ನೀನೇ ಹೇಳು ನನ್ನೋಲವೆ ಕಣ್ಣ ನೋಟದಲ್ಲೇ ನೀ ನನ್ನ ಸೆಳೆವೆ ನೆದ್ದೆಯಲ್ಲೊ ನಾ ನಿನ್ನೆಸರೇ ಕನವರಿಸುವೆ...! ನೀನೊಂದು ಮುಗ್ದತೆಯ ‌‌‌‌ಮಂಪರು ಗೊಂಬೆ ನನ್ನ ಮನದಾಸೆಯ ಉರ್ವಷಿ, ಮೇನಕೆ, ರಂಬೆ ಓ ಹುಡುಗಿ, ನೀನಿರದೆ ನಾನಾಗುವೇ ಬಾಡಿದ ಮರದ ಕೊಂಬೆ..!                                  -AliEn!     

ನನ್ನೊಳಗಿನ ಕವಿತೆ..!

ಹೇ ಹುಡುಗಿ, ನನ್ನೊಳಗಿನ ಕವಿತೆ ನೀನು .... ನಿನಗಾಗಿ ರಾತ್ರಿಯಿಡಿ ಬರೆದೆ ನಾನು ..!!  ನನ್ನೊಳಗಿನ ಕವಿತೆ ... ನೀನ್ ಇಲ್ಲದಿಂದ್ದು ಸಾಯುತ್ತೆ .. ನನ್ನೇಕೆ ನೀನು ಮರೆತೆ.. ಬೇರೆಲ್ಲಿ ಈ ಹೃದಯ ಸೇರುತ್ತೆ...! ಕವಿತೆಯ ಪ್ರತಿ ಪುಟದಲ್ಲೂ ನಿನ್ನ ಪ್ರತಿಬಿಂದವೇ ... ಒಡೆದಿರೋ ಗಾಜಲೂ ನಾ ನಿನ್ನನೇ ಕಾಣುವೇ.. ನಿನ್ನಯ ನೆನಪಲಿ ಈ ಮಳೆಯಲು ಬೆವರುವೇ... ಆ ಬೆವರಿನ ಹನಿಯಲು ನಿನ್ನ ಮುಖವಾಡವೇ...!  ನನ್ನೊಳಗಿನ ಕವಿತೆ ... ನೀನ್ ಇಲ್ಲದಿಂದ್ದು ಸಾಯುತ್ತೆ .. ಕಣ್ಣಿನ ಅಂಚಲಿ ನಾ ನಿನ್ನನೇ ನೆನೆಯುವೇ... ನೆನಪಿನ ಪುಟದಲಿ ಬರೆಯ ಏಕಾಂತವೇ... ಏಕಾಂತದ ಪ್ರತಿ ಕ್ಷಣದಲ್ಲೂ ನಿನ್ನನೇ ಬಯಸುವೇ ... ಆ ಬಯಕೆಯ ಕನಸಲು ನಿನ್ನೆ ಕನವರಿಸುವೇ ... ನನ್ನೊಳಗಿನ ಕವಿತೆ ... ನೀನ್ ಇಲ್ಲದಿಂದ್ದು ಸಾಯುತ್ತೆ ..     -AliEn!