Skip to main content

ತಾಳ್ಮೆಯೇ ಸದ್ಗುಣ


ನಿಮ್ಮ ನಿರೀಕ್ಷಿತ ಸಮಯದಲ್ಲಿ ಕೆಲಸಗಳು ನಡೆಯದ ಕಾರಣ ಮುಂದುವರೆಯುವುದು ಬೇಡ ಎಂದು  ನೀವು ಯೋಚಿಸಿದೀರಾ?
ನಿಮ್ಮ ಕೆಲಸದಲ್ಲಿ ಬೆಳವಣಿಗೆಯನ್ನು ಕಾಣದ ಕಾರಣ ನೀವು ಏನು ಮಾಡುತ್ತಿದ್ದೀರಿ ಅದನ್ನು ಕೈಬಿಡಲು  ನಿರ್ಧರಿಸಿದೀರಾ?
ನಿಮ್ಮ ಕೆಲಸದಲ್ಲಿ ಅನುಭವಿಸಿದ ವೈಫಲ್ಯಗಳಿಂದಾಗಿ ನೀವು ಎಂದಾದರೂ ಆ ಕೆಲಸವನ್ನು  ಕೊನೆಗೊಳಿಸಬೇಕೆಂದು ತೀರ್ಮಾನಿಸಿದೀರಾ?
ಜೀವನದಲ್ಲಿ ಅನಿವಾರ್ಯವಾಗಿ ಕಂಡ ಏರಿಳಿತದ ಕಾರಣದಿಂದಾಗಿ ನೀವು ದುಃಖದಿಂದ, ಖಿನ್ನತೆಯಿಂದ ಮತ್ತು ನಕಾರಾತ್ಮಕ ಭಾವನೆಗಳಿಂದ ಮುಳುಗಿದಾಗ, ಮಾಡುತ್ತಿರುವ ಕೆಲಸವನ್ನು ಅರ್ಧದಲ್ಲಿ ಬಿಡಬೇಕೆಂದು ನೀವು ಭಾವಿಸಿದಾಗ, ಜೀವನವನ್ನು ಮುಂದುವರಿಸಲು ಒಂದು ಕಾರಣವನ್ನು ನೋಡಲು ನಿಮಗೆ ಸಾಧ್ಯವಾಗದಿದ್ದಾಗ, ನಿಮನ್ನು ನೀವು ಸರಳವಾದ ಮತ್ತು ಆಳವಾದ ಒಂದು ಸಾದೃಶ್ಯವೆಂದು ಭಾವಿಸಿಕೊಳ್ಳಿ. ಅದಕ್ಕಾಗಿ ಈ ಸಣ್ಣ ಅನುಭವವನ್ನು ಓದಿ:
ಒಬ್ಬ ವ್ಯಕ್ತಿ ತನ್ನ ಹೊಲದಲ್ಲಿ ಜರೀಗಿಡ ಮತ್ತು ಬಿದಿರಿನ ಬೀಜಗಳನ್ನು ಬಿತ್ತಿದನು ಮತ್ತು ಅವುಗಳಿಗೆ  ಸಾಕಷ್ಟು ಬೆಳಕು ಮತ್ತು ನೀರು ಸಿಗುವಂತೆ ನೋಡಿಕೊಂಡರು.  ಜರೀಗಿಡವು ಭೂಮಿಯಿಂದ ಬೇಗನೆ ಮೊಳಕೆಯೊಡೆದು ಹೊರಹೊಮ್ಮಿ ಅದರ ಸಂಪೂರ್ಣ ಸುತ್ತಮುತ್ತಲಿನ ಪ್ರದೇಶಗಳನ್ನು ಹಸಿರು ಬಣ್ಣದಿಂದ ಆವರಿಸುವುದನ್ನು ನೋಡಿ ಅವನು ಸಂತೋಷಪಟ್ಟನು, ಆದರೆ ಬಿದಿರಿನ ನೋಟದಿಂದ ಏನೂ ಹೊರಬರದನ್ನು ನೋಡಿದಾಗ ಅವನು ನಿರಾಶೆಗೊಂಡನು, ಆದರೆ ಅವನು ಅದನ್ನು ಬಿಟ್ಟುಕೊಡಲಿಲ್ಲ, ತನ್ನ ಪ್ರಯತ್ನವನ್ನು ಮುಂದುವರೆಸಿದನು. 2 ನೇ ವರ್ಷದಲ್ಲಿ ಜರೀಗಿಡದ ಬೆಳವಣಿಗೆ ಐಷಾರಾಮಿ, ರೋಮಾಂಚಕ ಮತ್ತು ಹೇರಳವಾಗಿ ಬೆಳೆದಿತ್ತು ಆದರೆ ಬಿದಿರಿನ ಬೀಜದಿಂದ  ಇನ್ನೂ ಏನೂ ಹೊರಬರಲಿಲ್ಲ. ಆದರೆ ಆ ವ್ಯಕ್ತಿಯು ತನ್ನ ಪ್ರಯತ್ನವನ್ನು ಬಿಡಲಿಲ್ಲ, ಅವನು ಬಿದಿರಿನ ಆರೈಕೆಯನ್ನು ಮುಂದುವರೆಸಿದನು. 3 ನೇ ವರ್ಷದಲ್ಲಿ ಬಿದಿರಿನ ಬೀಜದಿಂದ ಇನ್ನೂ ಏನೂ ಬರಲಿಲ್ಲ ಆದರೆ ಅವನು ಇನ್ನೂ ತನ್ನ ಪ್ರಯತ್ನ ಬಿಟ್ಟುಕೊಡಲಿಲ್ಲ. 4 ನೇ ವರ್ಷದಲ್ಲಿ ಮತ್ತೊಮ್ಮೆ ಬಿದಿರಿನ ಬೀಜದಿಂದ ಏನೂ ಬರದನ್ನು ಅವನು ನೋಡಿದನು, ಈ ಬಾರಿಯೂ ಅವನು ಅದನ್ನು ಉಳಿಸಿಕೊಂಡನು ಮತ್ತು ತನ್ನ ಪ್ರಯತ್ನವನ್ನು ಮುಂದುವರೆಸಿದನು. 5 ನೇ ವರ್ಷದಲ್ಲಿ ಅವನು ಭೂಮಿಯಿಂದ ಬಿದಿರಿನ ಒಂದು ಸಣ್ಣ ಮೊಳಕೆ ಹೊರಹೊಮ್ಮುವುದನ್ನು ನೋಡಿದನು. ಜರೀಗಿಡಕ್ಕೆ ಹೋಲಿಸಿದರೆ ಬಿದಿರಿನ ಮೊಳಕೆ ಚಿಕ್ಕದಾಗಿದೆ ಮತ್ತು ಅತ್ಯಲ್ಪವಾಗಿತ್ತು, ಆದರೆ ಅಂದಿನಿಂದ ಕೇವಲ 6 ತಿಂಗಳಲ್ಲಿ ಬಿದಿರು 100 ಅಡಿ ಎತ್ತರಕ್ಕೆ ಬೆಳೆಯಿತು. ಆ ಬಿದಿರು ತನ್ನ ಬೇರುಗಳನ್ನು ಬೆಳೆಯಲು  5 ವರ್ಷಗಳನ್ನು ಕಳೆದಿದೆ ಮತ್ತು ಆ ಬೇರುಗಳು ಬಿದಿರನ್ನು ಬಲಪಡಿಸಲು, ಬದುಕಲು, ಅಭಿವೃದ್ಧಿ ಹೊಂದಲು, ಬೆಳೆಯಲು ಬೇಕಾದ ಎಲ್ಲವನ್ನೂ ಪೋಷಕಾಂಶವನ್ನು ನೀಡಿರುವುದನ್ನು ಅವನು ಅರಿತುಕೊಂಡ.
ನೋಡಿ, ಜೀವನವು ಯಾರಿಗೂ ನಿಭಾಯಿಸಲಾಗದ ಸವಾಲನ್ನು ನೀಡುವುದಿಲ್ಲ ಎಂಬುದು ನಿಜವಲ್ಲವೇ. ಈ ಸಮಯದಲ್ಲಿ ನೀವು ಸವಾಲು  ಎದುರಿಸುತ್ತಿದ್ದರೆ, ಅದನ್ನು ನಿಭಾಯಿಸುವ ಸಾಮರ್ಥ್ಯ ನಿಮ್ಮಲ್ಲಿದೆ ಎಂದು ಖಚಿತವಾಗಿ ತಿಳಿದುಕೊಳ್ಳಿ, ನಿಮ್ಮ ಸವಾಲುಗಳು ಮತ್ತು ಹೋರಾಟಗಳನ್ನು ಎದುರಿಸಲು ನೀವು ಮೀಸಲು ಮಾಡಿದ ಎಲ್ಲಾ ಸಮಯದಲ್ಲಿ ಬೇರುಗಳನ್ನು ಬೆಳೆಸುತ್ತಿರುವಿರಿ ಎಂದು ನಿಮಗೆ ತಿಳಿದಿರಲಿ. ಆ ವ್ಯಕ್ತಿ ಬಿದಿರನ್ನು ಬಿಟ್ಟುಕೊಡದಂತೆಯೇ, ನಿಮ್ಮನ್ನು ನೀವು  ಬಿಟ್ಟುಕೊಡಬೇಡಿ, ಎಂದಿಗೂ ಬಿಡಬೇಡಿ, ನಿಮ್ಮನ್ನು ಇತರರೊಂದಿಗೆ ಹೋಲಿಸಬೇಡಿ. ಬಿದಿರು ಮತ್ತು ಜರೀಗಿಡ ತುಂಬಾ ವಿಭಿನ್ನವಾಗಿವೆ, ಆದರೂ ಎರಡೂ ಅರಣ್ಯವನ್ನು ಸುಂದರಗೊಳಿಸುತ್ತವೆ, ಪ್ರತಿಯೊಂದೂ ಅದರ ವಿಭಿನ್ನ ಉದ್ದೇಶವನ್ನು ಪೂರೈಸುತ್ತವೆ. ನಿಮಗೊಂದು ಸಮಯ ಬರುತ್ತದೆ, ನೀವೂ ಬೆಳೆಯುತ್ತೀರ ಮತ್ತು ಎತ್ತರಕ್ಕೆ ಏರುತ್ತೀರ. ನಿಮ್ಮ ಸಾಮರ್ಥ್ಯದಷ್ಟು ಎತ್ತರಕ್ಕೆ ಹೋಗಿ, ಬೇರೊಬ್ಬರ ಸಾಮರ್ಥ್ಯದಷ್ಟಲ್ಲ. ತಾಳ್ಮೆಯಿಂದ ನಿಮ್ಮ ಕೆಲಸ ಮಾಡಿ. ಒಂದು ದಿನ ನೀವು ಬಿದಿರಿನಂತೆ ಎತ್ತರಕ್ಕೆ ಬೆಳೆಯುತ್ತೀರ. ಜೀವನದಲ್ಲಿ ಎಲ್ಲವೂ ಸರಿಯಾದ ಸಮಯದಲ್ಲಿ ನಡೆಯುತ್ತದೆ. ತಾಳ್ಮೆಯೇ ಸದ್ಗುಣ, ನಿಮಗಾಗಿ ಸರಿಯಾದ ಸಮಯ ಬರುತ್ತದೆ, ಕಾಯಿರಿ. ಅವಸರದಿಂದ ಚಿಂತಿಸಿ ನಿರ್ದರಿಸಬೇಡಿ.

Comments

Popular posts from this blog

ಆದರ್ಶ ಶಿಕ್ಷಕ

ಆದರ್ಶ ಶಿಕ್ಷಕ : "ಹಿಂದೆ ಗುರು ಇರಬೇಕು, ಮುಂದೊಂದು ಗುರಿ ಇರಬೇಕು ", ಎನ್ನುವ ಮಾತು ನನಗೆ ಯಾವಾಗಲೂ ಗುರುವಿನ ಮೇಲಿರುವ ನಂಬಿಕೆಯನ್ನು ತೋರಿಸುತ್ತದೆ. ಗುರು ಎನ್ನುವ ಪದಕ್ಕೆ ಅಥವಾ ಆ ವ್ಯಕ್ತಿತ್ವಕ್ಕೆ ಸಮಾಜದಲ್ಲಿರುವ ಪ್ರಾಮುಖ್ಯತೆ ಬಹುಶ ಬೇರೆ ಯಾವ ವ್ಯಕ್ತಿಗೂ ಇಲ್ಲ ಎಂದೆನಿಸುತ್ತದೆ. ಯಾಕೆಂದರೆ ಎಲ್ಲಾ ವ್ಯಕ್ತಿಗಳಿಗೂ ಮೂಲ ಈ ಗುರುವಿನ ಕಾರ್ಯವಲ್ಲವೇ ? ಅನಾದಿ ಕಾಲದಿಂದಲೂ ನಡೆದಾಡುವ ದೇವರೆಂದರೆ ತಾಯಿಯ ನಂತರ ನಿಲ್ಲುವುದು ಇದೆ ಗುರುವಿರಬಹುದು, ನಮ್ಮ ಗುರಿಗೆ ರೂವಾರಿಯಾಗುವ ಗುರು. ನನ್ನ ಬಹುದಿನದ ಅಂದರೆ ಚಿಕ್ಕ ವಯಸ್ಸಿನ ಗುರಿ ಗುರುಯಾಗಬೇಕೆಂದು ಅಂದರೆ ಶಿಕ್ಷಕ ವೃತಿಯನ್ನು ಅನುಸರಿಸಬೇಕೆಂದು, ಪ್ರಾಯಶಃ ಯಾಕಿರಬಹುದು? ನನ್ನ ಪ್ರಕಾರ ಭ್ರಷ್ಟಾಚಾರವೇ ಇಲ್ಲದ ಒಂದೇ ಒಂದು ಕ್ಷೇತ್ರ ಅದಾಗಿತ್ತು. ಆದರೆ ಇಂದಿನ ಪರಿಸ್ಥಿತಿ ಭಿನ್ನವಾಗಿಯೇ ಇದೆ ಬಿಡಿ..., ವೇದಗಳ ಕಾಲದಿಂದಲೂ ಬ್ರಾಹ್ಮಣರಿಗೆ ಮಾತ್ರ ವಿದ್ಯಾಭ್ಯಾಸ ಬೇಕು , ಅವರು ಮಾತ್ರ ಗುರು ಸ್ಥಾನದಲ್ಲಿ ಇರಬೇಕೆಂಬ ಧೋರಣೆ ಬದಲಾಗಿದೆ. ಶಿಕ್ಷಣವನ್ನು ನೀಡುದುವ ಪ್ರತಿಯೊಬ್ಬರೂ ಶಿಕ್ಷಕರಾಗಿದ್ದಾರೆ. ಮನೆಯೇ ಮೊದಲ ಪಾಠಶಾಲೆ , ತಾಯಿಯೇ ಮೊದಲ ಗುರು ಎನ್ನುವ ಮಾತಿನಂತೆ, 6 ನೇ ವಯಸ್ಸಿಗೆ ಒಂದು ಮಗು ( ಈಗ ಮೂರನೇ ವಯಸ್ಸೇ ಆಗಿರುವುದು ಶೋಚನೀಯವೇ ಸರಿ ) ಶಾಲೆಯಲ್ಲಿ ತನ್ನ ಭವಿಷ್ಯವನ್ನು ಕಟ್ಟಿಕೊಳ್ಳುವ ಪದ್ಧತಿ ಇದೆ. 6  ವರ್ಷದ ಆ ಮಗುವನ್ನು ತಿದ್ದುವ ಸಂಪೂರ್ಣ ಜವಾಬ...

Kannada Poem

ಮುಗ್ದತೆಯ ‌‌‌‌ಮಂಪರು ಗೊಂಬೆ..!! ಲೇ ಹುಡುಗಿ,  ನಾನಿಂದು ನಿನ್ನ ಪ್ರೆಮ ಪೀಡಿತ ನನ್ನವಳಂತು ನೀ ಖಂಡಿತ ನನಗರಿವಿಲ್ಲ ಏನಿದ್ದಕ್ಕೆ ಪ್ರೇರೇಪಿತ ನೀನಿಲ್ಲದೆ ನಿಲ್ಲುತ್ತೆ ನನ್ನ ಎದೆಬಡಿತ..! ನನ್ನನೇಕೆ ಕಾಡಿಸುತೀಯ ಓ ಹೆಣ್ಣೇ ಮರೆಯಲಾರೆ ಕಣ್ಣಲ್ಲಿ ನೀ ಕೊಟ್ಟ ಸನ್ನೆ ನಿನ್ನಾ ಜೋಡಿಸಿರುವ ಹಲ್ಲುಗಳು ದಾಳಿಂಬೆ ಹಣ್ಣೇ ನೀನಿರದೆ ಬದುಕಲಾರೆ ಭೂಮಿ ತಾಯಾಣೇ...! ಮನದಲಿರುವುದನ್ನು ಹೇಳುವಾಸೆ ಚೆಲುವೆ ನನಗಿಂತ ಮೊದಲು ನೀನೇ ಹೇಳು ನನ್ನೋಲವೆ ಕಣ್ಣ ನೋಟದಲ್ಲೇ ನೀ ನನ್ನ ಸೆಳೆವೆ ನೆದ್ದೆಯಲ್ಲೊ ನಾ ನಿನ್ನೆಸರೇ ಕನವರಿಸುವೆ...! ನೀನೊಂದು ಮುಗ್ದತೆಯ ‌‌‌‌ಮಂಪರು ಗೊಂಬೆ ನನ್ನ ಮನದಾಸೆಯ ಉರ್ವಷಿ, ಮೇನಕೆ, ರಂಬೆ ಓ ಹುಡುಗಿ, ನೀನಿರದೆ ನಾನಾಗುವೇ ಬಾಡಿದ ಮರದ ಕೊಂಬೆ..!                                  -AliEn!     

ನನ್ನೊಳಗಿನ ಕವಿತೆ..!

ಹೇ ಹುಡುಗಿ, ನನ್ನೊಳಗಿನ ಕವಿತೆ ನೀನು .... ನಿನಗಾಗಿ ರಾತ್ರಿಯಿಡಿ ಬರೆದೆ ನಾನು ..!!  ನನ್ನೊಳಗಿನ ಕವಿತೆ ... ನೀನ್ ಇಲ್ಲದಿಂದ್ದು ಸಾಯುತ್ತೆ .. ನನ್ನೇಕೆ ನೀನು ಮರೆತೆ.. ಬೇರೆಲ್ಲಿ ಈ ಹೃದಯ ಸೇರುತ್ತೆ...! ಕವಿತೆಯ ಪ್ರತಿ ಪುಟದಲ್ಲೂ ನಿನ್ನ ಪ್ರತಿಬಿಂದವೇ ... ಒಡೆದಿರೋ ಗಾಜಲೂ ನಾ ನಿನ್ನನೇ ಕಾಣುವೇ.. ನಿನ್ನಯ ನೆನಪಲಿ ಈ ಮಳೆಯಲು ಬೆವರುವೇ... ಆ ಬೆವರಿನ ಹನಿಯಲು ನಿನ್ನ ಮುಖವಾಡವೇ...!  ನನ್ನೊಳಗಿನ ಕವಿತೆ ... ನೀನ್ ಇಲ್ಲದಿಂದ್ದು ಸಾಯುತ್ತೆ .. ಕಣ್ಣಿನ ಅಂಚಲಿ ನಾ ನಿನ್ನನೇ ನೆನೆಯುವೇ... ನೆನಪಿನ ಪುಟದಲಿ ಬರೆಯ ಏಕಾಂತವೇ... ಏಕಾಂತದ ಪ್ರತಿ ಕ್ಷಣದಲ್ಲೂ ನಿನ್ನನೇ ಬಯಸುವೇ ... ಆ ಬಯಕೆಯ ಕನಸಲು ನಿನ್ನೆ ಕನವರಿಸುವೇ ... ನನ್ನೊಳಗಿನ ಕವಿತೆ ... ನೀನ್ ಇಲ್ಲದಿಂದ್ದು ಸಾಯುತ್ತೆ ..     -AliEn!