Skip to main content

ಅನುಮತಿ ಕೊಡು

 ನೀ ನಾಚಿ ಇನೊಮ್ಮೆ ನಕ್ಕು ಬಿಡಬೇಡ ನನ್ನ ನೋಡಿ, 

ನಿನ್ನ ನಾಚಿಕೆ ನೋಡಿ ನಾ ನಿನ್ನ ಪ್ರೀತಿಯಲ್ಲಿ ಮರುಳಾಗಿಬಿಡುವೆ, 

ಮತೊಮ್ಮೆ ಹೇಳಿ ಬಿಡುವೆಯಾ ನಿನ್ನ ಮನದಾಳದ ರಾಗವ ಹಾಡಿ, 

ನಾ ಇನೊಮ್ಮೆ ನಿನ್ನ ರಾಗಕ್ಕೆ ನನ್ನ ರಾಗ ಸೇರಿಸಿ ಈ ಜಗಕ್ಕೆ ಹೇಳಿ ಕೂಗಿ ಬಿಡುವೆ,

ಪುಟ ಹೃದಯ ಇದು ಹುಚ್ಚು ಕನಸು ಕಂಡಿದೆ ಎಂದು,

ಆ ಹುಚ್ಚ ಕನಸಲ್ಲಿ ನಿನ್ನನ್ನೇ ತುಂಬಿರುವೆ ಇಂದು,

ಒಮ್ಮೆ ಕೂಗಿ ಹೇಳಿ ಬಿಡು ಆ ಕನಸಿನ ರಾಣಿ ನೀ ಆಗುವೆಯಾ, 

ನಿನ್ನ ನನ್ನ ಹೃದಯದಲ್ಲಿ ಪಟ್ಟಾಭಿಷೇಕ ಮಾಡಲು ಕಾದಿರುವೆಯಾ,

ಒಮ್ಮೆ ನೀ ಈ ಸಿಂಹಾಸನ ಏರಿ ಹೃದಯದ ಒಡತಿ ಆಗಿಬಿಡು,

ಸದಾ ಕಾಲ ನಿನ್ನ ಸೇನಾಧಿಪತಿಯಾಗಿ ನಿನ್ನನ್ನು ಕಾಯಲು ಅನುಮತಿ ಕೊಡು..!

Comments

Popular posts from this blog

ಆದರ್ಶ ಶಿಕ್ಷಕ

ಆದರ್ಶ ಶಿಕ್ಷಕ : "ಹಿಂದೆ ಗುರು ಇರಬೇಕು, ಮುಂದೊಂದು ಗುರಿ ಇರಬೇಕು ", ಎನ್ನುವ ಮಾತು ನನಗೆ ಯಾವಾಗಲೂ ಗುರುವಿನ ಮೇಲಿರುವ ನಂಬಿಕೆಯನ್ನು ತೋರಿಸುತ್ತದೆ. ಗುರು ಎನ್ನುವ ಪದಕ್ಕೆ ಅಥವಾ ಆ ವ್ಯಕ್ತಿತ್ವಕ್ಕೆ ಸಮಾಜದಲ್ಲಿರುವ ಪ್ರಾಮುಖ್ಯತೆ ಬಹುಶ ಬೇರೆ ಯಾವ ವ್ಯಕ್ತಿಗೂ ಇಲ್ಲ ಎಂದೆನಿಸುತ್ತದೆ. ಯಾಕೆಂದರೆ ಎಲ್ಲಾ ವ್ಯಕ್ತಿಗಳಿಗೂ ಮೂಲ ಈ ಗುರುವಿನ ಕಾರ್ಯವಲ್ಲವೇ ? ಅನಾದಿ ಕಾಲದಿಂದಲೂ ನಡೆದಾಡುವ ದೇವರೆಂದರೆ ತಾಯಿಯ ನಂತರ ನಿಲ್ಲುವುದು ಇದೆ ಗುರುವಿರಬಹುದು, ನಮ್ಮ ಗುರಿಗೆ ರೂವಾರಿಯಾಗುವ ಗುರು. ನನ್ನ ಬಹುದಿನದ ಅಂದರೆ ಚಿಕ್ಕ ವಯಸ್ಸಿನ ಗುರಿ ಗುರುಯಾಗಬೇಕೆಂದು ಅಂದರೆ ಶಿಕ್ಷಕ ವೃತಿಯನ್ನು ಅನುಸರಿಸಬೇಕೆಂದು, ಪ್ರಾಯಶಃ ಯಾಕಿರಬಹುದು? ನನ್ನ ಪ್ರಕಾರ ಭ್ರಷ್ಟಾಚಾರವೇ ಇಲ್ಲದ ಒಂದೇ ಒಂದು ಕ್ಷೇತ್ರ ಅದಾಗಿತ್ತು. ಆದರೆ ಇಂದಿನ ಪರಿಸ್ಥಿತಿ ಭಿನ್ನವಾಗಿಯೇ ಇದೆ ಬಿಡಿ..., ವೇದಗಳ ಕಾಲದಿಂದಲೂ ಬ್ರಾಹ್ಮಣರಿಗೆ ಮಾತ್ರ ವಿದ್ಯಾಭ್ಯಾಸ ಬೇಕು , ಅವರು ಮಾತ್ರ ಗುರು ಸ್ಥಾನದಲ್ಲಿ ಇರಬೇಕೆಂಬ ಧೋರಣೆ ಬದಲಾಗಿದೆ. ಶಿಕ್ಷಣವನ್ನು ನೀಡುದುವ ಪ್ರತಿಯೊಬ್ಬರೂ ಶಿಕ್ಷಕರಾಗಿದ್ದಾರೆ. ಮನೆಯೇ ಮೊದಲ ಪಾಠಶಾಲೆ , ತಾಯಿಯೇ ಮೊದಲ ಗುರು ಎನ್ನುವ ಮಾತಿನಂತೆ, 6 ನೇ ವಯಸ್ಸಿಗೆ ಒಂದು ಮಗು ( ಈಗ ಮೂರನೇ ವಯಸ್ಸೇ ಆಗಿರುವುದು ಶೋಚನೀಯವೇ ಸರಿ ) ಶಾಲೆಯಲ್ಲಿ ತನ್ನ ಭವಿಷ್ಯವನ್ನು ಕಟ್ಟಿಕೊಳ್ಳುವ ಪದ್ಧತಿ ಇದೆ. 6  ವರ್ಷದ ಆ ಮಗುವನ್ನು ತಿದ್ದುವ ಸಂಪೂರ್ಣ ಜವಾಬ...

ನನ್ನೊಳಗಿನ ಕವಿತೆ..!

ಹೇ ಹುಡುಗಿ, ನನ್ನೊಳಗಿನ ಕವಿತೆ ನೀನು .... ನಿನಗಾಗಿ ರಾತ್ರಿಯಿಡಿ ಬರೆದೆ ನಾನು ..!!  ನನ್ನೊಳಗಿನ ಕವಿತೆ ... ನೀನ್ ಇಲ್ಲದಿಂದ್ದು ಸಾಯುತ್ತೆ .. ನನ್ನೇಕೆ ನೀನು ಮರೆತೆ.. ಬೇರೆಲ್ಲಿ ಈ ಹೃದಯ ಸೇರುತ್ತೆ...! ಕವಿತೆಯ ಪ್ರತಿ ಪುಟದಲ್ಲೂ ನಿನ್ನ ಪ್ರತಿಬಿಂದವೇ ... ಒಡೆದಿರೋ ಗಾಜಲೂ ನಾ ನಿನ್ನನೇ ಕಾಣುವೇ.. ನಿನ್ನಯ ನೆನಪಲಿ ಈ ಮಳೆಯಲು ಬೆವರುವೇ... ಆ ಬೆವರಿನ ಹನಿಯಲು ನಿನ್ನ ಮುಖವಾಡವೇ...!  ನನ್ನೊಳಗಿನ ಕವಿತೆ ... ನೀನ್ ಇಲ್ಲದಿಂದ್ದು ಸಾಯುತ್ತೆ .. ಕಣ್ಣಿನ ಅಂಚಲಿ ನಾ ನಿನ್ನನೇ ನೆನೆಯುವೇ... ನೆನಪಿನ ಪುಟದಲಿ ಬರೆಯ ಏಕಾಂತವೇ... ಏಕಾಂತದ ಪ್ರತಿ ಕ್ಷಣದಲ್ಲೂ ನಿನ್ನನೇ ಬಯಸುವೇ ... ಆ ಬಯಕೆಯ ಕನಸಲು ನಿನ್ನೆ ಕನವರಿಸುವೇ ... ನನ್ನೊಳಗಿನ ಕವಿತೆ ... ನೀನ್ ಇಲ್ಲದಿಂದ್ದು ಸಾಯುತ್ತೆ ..     -AliEn!

ಕಾಡಬೇಡ ಗೆಳತಿ

 ಹಗಲು ಇರುಳೆನ್ನದೆ ಕಾಡಿದೆಯನ್ನ ಕಿರುನಗೆ ಬೀರುತ ಮೋಹಿಸಿದೆಯನ್ನ ಕನಸ, ನನಸಾಗಿಸಿ ಆಲಂಗಿಸಿದೆಯನ್ನ ನೆನಪುಗಳ ಭಾವದಲ್ಲಿ ಬಂಧಿಸಿರುವೆಯನ್ನ..!! ಎಂದು ಬರುವೆ...? ಈ ಕನಸ ಹೂವಾಗಿಸಿ,ನಲ್ಮೆಯ ರಸದೌತಣ ಉಣಬಡಿಸಲು ಕಾದಿರುವೆ ನಾನಿನ್ನ, ತುಂಬಿದ ಹೃದಯದಲ್ಲಿ ಭಾಂದವ್ಯದ ಭಾವ ತಿಜೋರಿಯೊಳಗೆ ಬಂಧಿರೀಸಿರುವೆ ನಿನ್ನ..!! ಅನುರಾಗದ ಅರಮನೆಯಲ್ಲಿ ಕಾದಿರುವೆ ನಿನಗಾಗಿ ಎದೆ ಕದವ ತೆರೆದು, ಈ ಜಗದ ದೊಂಬಿಯ ಮರೆತು ಹೃದಯ ತಾಳ ತಪ್ಪುತಿರುವುದು, ಮುತ್ತಿನ ಮಳೆ ಸುರಿಸುತ್ತ, ನಮ್ಮ ಪಾಲಿಗೆ ಇದು ಸ್ವರ್ಗವಾಗಿರುವುದು..!! ಅಂತರಂಗದಿ ಪುಟಿದೇಳುತಿದೆ ನಿನ್ನಯ ಚೆಲುವು ತುಂಬಿದ ಕಂಗಳ ನೆನೆದು, ಬಯಕೆ ಮೂಡಿಹುದು ಮನಸು ನಿನ್ನ ಸೇರಲು ಹಪಹಪಿಸುತ್ತಿರುವುದು, ನಿನ್ನ ಕಾಣುವ ಹಂಬಲದಿ ಕನಸುಗಳ ಹೆಣೆಯುತಿಹುದು..!! ಮನಕ್ಕೆ ಬೇಕಿಹುದು ನಿನ್ನ ತೋಳಬಲದ ಅಪ್ಪುಗೆ, ಕಳೆದು ಹೋಗುವೆ ಪ್ರೀತಿಯ ಬೇಡುತ ನಿನ್ನೊಪ್ಪಿಗೆ, ಎದೆಗೊರಗಿ ನಾನು ನಿದ್ರಿಸುವೆ ಮಗುವಾಗಿ, ಅಪ್ಪಿ ಮುದ್ದಿಸುವೆಯಾ ನೀ ಬೆಳದಿಂಗಳ ಚಂದಿರನಾಗಿ..!! "ಕಾಡಬೇಡ ಗೆಳತಿ ನೀನಿನ್ನೂ ದೂರ ನಿಂತು ಕಾಡಿಸಿದ್ದು ಸಾಕಿನ್ನೂ "